Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಭಗವಚ್ಚಿಂತನ ಸಾಧನ ಶಿಬಿರ
Date:-28.06.2025 ಶ್ರೀಮಠದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ಪ್ರಾರಂಭ

Daily News
ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ನೆರವೇರಿದ ವಿಶ್ವ ಯೋಗ ದಿನಾಚರಣೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ವಿಶ್ವ ಯೋಗದಿನಾಚರಣೆ ಸಮಾರಂಭವು ದಿನಾಂಕ: 21.06.2025 ರಂದು ಮುಂಜಾನೆ 06-30 ಗಂಟೆಗೆ ಶ್ರೀಮಠದ ಕೈಲಾಸ ಮಂಟಪದ ಮುಂದಿನ ಆವರಣದಲ್ಲಿ ನೆರವೇರಿತು. ಸದರ ಕಾರ್ಯಕ್ರಮದ ಸಾನಿಧ್ಯವನ್ನು ಪರಮ ಪೂಜ್ಯಶ್ರೀ ಬಸವಾನಂದ ಮಹಾಸ್ವಾಮಿಗಳು, ಶ್ರೀಗುರು ಬಸವಾ ಮಹಾಮನೆ ಮನಗುಂಡಿ ಇವರು ವಹಿಸಿ ಮಾತನಾಡುತ್ತಾ ಐದು ಶಕ್ತಿಗಳಿಂದ ಕೂಡಿದ್ದು ಯೋಗ, ದೈಹಿಕ ಶಕ್ತಿ, ಬುದ್ದಿ ಶಕ್ತಿ, ಪ್ರಾಣ ಶಕ್ತಿ, ಮಾನಸಿಕ ಶಕ್ತಿ, ಭಾವನಾ ಶಕ್ತಿಗಳಿಂದ ಹುಟ್ಟಿಕೊಂಡಿದ್ದು ಯೋಗ. ದೈಹಿಕ ಶಕ್ತಿಗೆ ಕರ್ಮಯೋಗ ಅಂತಾ ಭಗವದ್ಗೀತೆಯಲ್ಲಿ ಕರೆಯುತ್ತಾರೆ. ನಾವು ನಡೆಯಬೇಕಾದರೆ ಬಾಗಬೇಕಾದರೆ ಶರೀರದಲ್ಲಿ ಶಕ್ತಿ ಬೇಕು, ಪ್ರಾಣಶಕ್ತಿ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುವುದು ಹಟಯೋಗ, ಬುದ್ದಿ ಶಕ್ತಿ ಜ್ಞಾನಯೋಗ ಮನಸ್ಸಿನ ಶಕ್ತಿಯನ್ನು ಬಳಸುವುದು ಶ್ರೀ ಸಿದ್ಧಾರೂಢರು ಬುದ್ಧಿ ಶಕ್ತಿಯನ್ನು ಬಳಸುತ್ತಿದ್ದರು. ಬೇರೆ ಬೇರೆ ದೇಶಗಳು ಒಂದೊಂದು ವಿಷಯಕ್ಕೆ ಪ್ರಖ್ಯಾತಿಯನ್ನು ಪಡೆದಿರುತ್ತವೆ ಆದರೆ ಭಾರತ ದೇಶವು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ದೇಶವಾಗಿದೆ ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಅಂತಾ ನುಡಿದರು. ಉದ್ಘಾಟಣೆಯನ್ನು ಶ್ರೀ ಸಿಎ. ಚನ್ನವೀರ ಮುಂಗುರವಾಡಿ, ಚೇರ್‌ಮನ್ನರು, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ. ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಇವರುಗಳು ಉಪಸ್ಥಿತರಿದ್ದರು. ಡಾ|| ಪಂಚಲಿಂಗಪ್ಪ ಜಂಬಣ್ಣ ಕವಲೂರು, ಶ್ರೀ ಆರೂಢ ಯೋಗಕೇಂದ್ರ, ಹುಬ್ಬಳ್ಳಿ. ಇವರು ಯೋಗ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ನೆರವೇರಿಸಿದರು. ಭಕ್ತಾದಿಗಳು ಮತ್ತು ಸಾರ್ವಜನಿಕರು ಇದರಲ್ಲಿ ಹೆಚ್ಚಿನ ಸಂಖ್ಯೆೆಯಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಡಾ|| ಪ್ರವೀಣಭಾಯಿ ತೊಗಾಡಿಯಾ ಇವರ ಭೆಟ್ಟಿ

ದಿನಾಂಕ:-16.04.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಡಾ|| ಪ್ರವೀಣಭಾಯಿ ತೊಗಾಡಿಯಾ ಇವರು ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರಿಗೆ ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಸಿದ್ಧನಗೌಡ ಪಿ. ಪಾಟೀಲ, ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರೆಂದು ಶ್ರೀಮಠದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ದಿನಾಂಕ: 05.06.2025 ರಂದು ಮುಂಜಾನೆ 11-00 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀಮಠದ ಆವರಣದಲ್ಲಿ ಸಸಿಗಳನ್ನು ಹಚ್ಚಲಾಯಿತು. ಪರಿಸರ ತಜ್ಞರು ಹಾಗೂ ಪರಿಸರ ಪ್ರೇಮಿಗಳಾದ ಡಾ|| ಮಹಾಂತೇಶ ತಪಶೆಟ್ಟಿ ಇವರು ಅತಿಥಿಗಳಾಗಿ ಆಗಮಿಸಿ ಗಿಡಗಳನ್ನು ಹಚ್ಚುವ ಪದ್ದತಿ ಹಾಗೂ ಮುಂಜಾಗ್ರತೆಯನ್ನು ವಹಿಸುವುದು ಪಾಲನೆ ಪೋಷಣೆ ಮಾಡುವುದರ ಬಗ್ಗೆ ತಿಳಿಸಿಕೊಟ್ಟರು. ಅತಿಥಿಗಳಾಗಿ ಆಗಮಿಸಿದ ಉದ್ಯಮಿಗಳಾದ ಶ್ರೀ ಚನ್ನು ಹೊಸಮನಿ ಇವರು ಶ್ರೀಮಠದ ಆವರಣದಲ್ಲಿ ಪ್ಲಾಸ್ಟಿಕ ನಿರ್ಮೂಲನೆ ಮಾಡಲು ಸಂದೇಶ ನೀಡಿದರು. ಟ್ರಸ್ಟ ಕಮೀಟಿಯ ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ ಘೋಡಕೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ ಇವರು ಪ್ಲಾಸ್ಟಿಕನ್ನು ಮಿತವಾಗಿ ಬಳಸುವುದರ ಜೊತೆಗೆ ಪರಿಸರವನ್ನು ಸಂರಕ್ಷಿಸಲು ಕರೆ ನೀಡಿದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಟ್ರಸ್ಟ ಕಮೀಟಿಯ ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಕಲಬುರ್ಗಿಯವರು ನಿರ್ವಹಿಸಿದರು. ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ನಾ. ಪಾಠಕ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಮಣ್ಣೂರ, ಶ್ರೀ ಮಂಜುನಾಥ ಮುನವಳ್ಳಿ ಹಾಗೂ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ಎಸ್. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರೆಂದು ಟ್ರಸ್ಟ ಕಮೀಟಿಯ ಪ್ರಕಟಣೆ ಮೂಲಕ ತಿಳಿಸಿದೆ.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಜೋಗಾರಾಮ ಪಟೇಲ ಇವರ ಭೆಟ್ಟಿ

ದಿನಾಂಕ:-30.05.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ರಾಜಸ್ಥಾನ ರಾಜ್ಯದ ಕಾನೂನು ಹಾಗೂ ಸಂಸ್ಥದೀಯ ವ್ಯವಹಾರ ಸಚಿವರಾದ ಸನ್ಮಾನ್ಯ ಶ್ರೀ ಜೋಗಾರಾಮ ಪಟೇಲ ಹಾಗೂ ರಾಜಸ್ಥಾನದ ಶಾಸಕರಾದ ಸನ್ಮಾನ್ಯ ಶ್ರೀ ಅರುಣ ಚೌದರಿ ಇವರು ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರಿಗೆ ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿದ ಸಚಿವರು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆ ದರ್ಶನ ಪಡೆದು ಇಂತಹ ಪುಣ್ಯ ಕ್ಷೇತ್ರದ ದರ್ಶನ ಮಾಡಿದ್ದು ನನ್ನ ಪುಣ್ಯವೆಂದು ನುಡಿದು ಅತೀವ ಆನಂದವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಮಾಜಿ ಚೇರ್‌ಮನ್ನರಾದ ಶ್ರೀ ಮಹೇಂದ್ರ ಸಿಂಘಿ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರೆಂದು ಶ್ರೀಮಠದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.

ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಗಳವರ ೬೩ನೇ ಪುಣ್ಯಾರಾಧನೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಮೌನಮುನಿ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರ ೬೩ನೇ ಪುಣ್ಯಾರಾಧನೆ ಕಾರ್ಯಕ್ರಮ ದಿನಾಂಕ: ೦೭-೦೫-೨೦೨೫ ರಂದು ಮುಂಜಾನೆ ಉಭಯ ಶ್ರೀಗಳವರ ಅಭಿಷೇಕದ ಪೂಜೆಯೊಂದಿಗೆ ಪ್ರಾರಂಭವಾಗಿ ನಂತರ ೯ ಘಂಟೆಯಿAದ ೧೨-೩೦ ಘಂಟೆಯವರೆಗೆ ಪೂಜ್ಯ ಮಹಾತ್ಮರಿಂದ, ಸ್ವಾಮಿಜಿಗಳಿಂದ “ಸ್ಥಿತ ಪ್ರಜ್ಞ ಗುರುನಾಥಾರೂಢರು” ಎಂಬ ವಿಷಯದ ಕುರಿತು ಪರಮ ಪೂಜ್ಯ ಡಾ|| ಶ್ರೀ ಶಿವಾನಂದಭಾರತಿ ಮಹಾಸ್ವಾಮಿಗಳವರು ಮಾತನಾಡುತ್ತಾ “ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಬ್ರಹ್ಮನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಗುರುನಾಥಾರೂಢ ಮಹಾಸ್ವಾಮಿಗಳಿಗೆ ತೋರಿಸಿಕೊಟ್ಟರು. ಗುರುವಿನ ಸೇವೆಯನ್ನು ಭಕ್ತಿ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಿದ್ದಾದರೆ ಸದ್ಗುರು ಒಲಿಯುತ್ತಾನೆ. ಕಲಿಯುಗದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಹಾಗೂ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರು ಮಾನವ ಜನ್ಮ ಉದ್ಧಾರಕ್ಕೋಸ್ಕರವಾಗಿ ಅವತರಿಸಿದ್ದು ಮುಮುಕ್ಷÄಗಳಿಗೆ ಕೇವಲ ನಾಮಸ್ಮರಣೆಯಿಂದಲೆ ಮುಕ್ತಿಯನ್ನು ನೀಡುತ್ತಾ ಬಂದಿರುತ್ತಾರೆ ಆದ್ದರಿಂದ ನಾವೆಲ್ಲರೂ ಪ್ರತಿ ದಿನ ಪ್ರತಿ ಕ್ಷಣ ನಾಮಸ್ಮರಣೆ ಮಾಡುತ್ತಾ ಸದ್ಗುರುವಿನ ಕೃಪೆಗೆ ಪಾತ್ರರಾಗಿ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ನುಡಿದರು” ಈ ಬ್ರಹ್ಮ ವೇದಿಕೆಯಲ್ಲಿ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ನಾಗೇಶ್ವರ ಸ್ವಾಮಿಗಳು, ಉಪ್ಪಾರಟ್ಟಿ, ಪರಮ ಪೂಜ್ಯ ಶ್ರೀ ಮಲ್ಲೇಶ್ವರ ಶಿವಶರಣರು, ಹಡಗಿನಾಳ, ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ಶಾಂತಾನAದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ಆತ್ಮಾನಂದ ಸ್ವಾಮಿಗಳು,ತಳಕಟ್ನಾಳ, ಪರಮ ಪೂಜ್ಯ ಶ್ರೀ ಕೃಷ್ಣಾನಂದ ಸ್ವಾಮಿಗಳು,ಯಕನಳ್ಳಿ, ಪರಮ ಪೂಜ್ಯ ಶ್ರೀ ಭೀಷ್ಮಗೌಡರ ಪಾಟೀಲ, ಪರಮ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು, ಹುಬ್ಬಳ್ಳಿ, ಪರಮ ಪೂಜ್ಯ ಶ್ರೀ ಸದಾನಂದ ಸ್ವಾಮಿಗಳು, ಮಹಾಲಿಂಗಪೂರ, ಮಾತೋಶ್ರೀ ಅಮೃತಾನಂದಮಯಿ, ಗುಲಬುರ್ಗಾ, ಮಾತೋಶ್ರೀ ಜಾನಮ್ಮ ತಾಯಿಯವರು, ದೇವರಹುಬ್ಬಳ್ಳಿ, ಮಾತೋಶ್ರೀ ಲಲಿತಮ್ಮತಾಯಿ, ಕಲ್ಲೂರ, ಮಾತೋಶ್ರೀ ಅರುಣಾ ತಾಯಿ, ಸೊಲ್ಲಾಪುರ, ಮಾತೋಶ್ರೀ ದಯಾಭಾರತಿ ತಾಯಿ, ಬದಾಮಿ ಇವರು ಉಪಸ್ಥಿತರಿದ್ದರು ಹಾಗೂ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಎಲ್ಲ ಪೂಜ್ಯರನ್ನು ಗೌರವಿಸಿದರು. ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಉಪಸ್ಥಿತರಿದ್ದರು. ಸದರ ಕಾರ್ಯಕ್ರಮವನ್ನು ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ದಿನಾಂಕ:-೦೭.೦೫.೨೦೨೫ ರಂದು ೯ ಘಂಟೆಯಿAದ ೧೨-೩೦ ಘಂಟೆಯವರೆಗೆ ಪೂಜ್ಯ ಮಹಾತ್ಮರುಗಳ ಪ್ರವಚನ, ಮಧ್ಯಾಹ್ನ ೧೨-೩೦ ಘಂಟೆಗೆ ಶ್ರೀಗಳವರ ಪಾಲಕಿಯು ನಗರದಲ್ಲಿ ಸಂಚರಿಸಿ ಸಾಯಂಕಾಲ ೫ ಘಂಟೆಗೆ ಶ್ರೀಮಠಕ್ಕೆ ಬಂದ ನಂತರ ಕೈಲಾಸ ಮಂಟಪದ ಪೂಜೆಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಂಡಿತು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಭಜನಾ ಸಮಾವೇಶ ಉದ್ಘಾಟನಾ ಸಮಾರಂಭ.

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಜಯಂತ್ಯೋತ್ಸವದ ನಿಮಿತ್ಯವಾಗಿ ಹತ್ತನೇ ವರ್ಷದ ಭಜನಾ ಸಮಾವೇಶದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು. ಹಿರಿಯ ಧರ್ಮದರ್ಶಿಗಳು ಹಾಗೂ ನ್ಯಾಯವಾದಿಗಳಾದ ಶ್ರೀ ಕೆ.ಎಲ್.ಪಾಟೀಲ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಮಟ್ಟದ ಭಜನಾ ಸಮಾವೇಶದ ಕಾರ್ಯಾಧ್ಯಕ್ಷರಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಎಲ್ಲರನ್ನು ಸ್ವಾಗತಿಸಿದರು. ದಿವ್ಯ ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಆತ್ಮಾನಂದ ಮಹಾಸ್ವಾಮಿಗಳು ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಇವರು ವಹಿಸಿದ್ದರು. ರಾಜ್ಯ ಮಟ್ಟದ ಭಜನಾ ಸಮಾವೇಶದ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀ ಮಠದ ಮ್ಯಾನೇಜರ್ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗದವರು ಹಾಗೂ ಭಕ್ತರು ಹಾಜರಿದ್ದರೆಂದು ಶ್ರೀಮಠದ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ವಿಜೃಂಭಣೆಯಿ0ದ ಜರುಗಿದ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳವರ 190 ನೇ ಜನ್ಮೋತ್ಸವ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ 190 ನೇ ಜನ್ಮೋತ್ಸವವನ್ನು ದಿನಾಂಕ: 06-04-2025 ರಂದು ಅತೀ ವಿಜೃಂಭಣೆಯಿ0ದ ನೆರವೇರಿಸಲಾಯಿತು. ಜನ್ಮೋತ್ಸವದ ಅಂಗವಾಗಿ ಪ್ರಾತ:ಕಾಲ 5.30 ಘಂಟೆಗೆ ಉಭಯಶ್ರೀಗಳವರ ಗದ್ದುಗೆಗಳಿಗೆ ಅಭೀಷೇಕ, ಅಪರಾಹ್ನ:12-00 ಘಂಟೆಗೆ ಸುಮಂಗಲೆಯರಿಗೆ ಉಡಿತುಂಬುವುದು, 12-30 ಘಂಟೆಗೆ ಶ್ರೀಗಳವರ ಉತ್ಸವ ಮೂರ್ತಿಯ ಪಾಲಕಿಯು ವಾದ್ಯಮೇಳಗಳೊಂದಿಗೆ ಹೊರಟು ನಗರದಲ್ಲಿ ಸಂಚರಿಸಿ ಬಂದ ನಂತರ ಸಾಯಂಕಾಲ:5-30 ಘಂಟೆಗೆ ಕುಂಭಹೊತ್ತ ಮಹಿಳೆಯರು ಶ್ರೀಮಠಕ್ಕೆ ಬರಮಾಡಿಕೊಂಡರು. 5-45 ಘಂಟೆಗೆ ಶ್ರೀಮಠದ ಕೈಲಾಸಮಂಟಪದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಚಾಲನೆಯನ್ನು ನೀಡಿದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಟ್ರಸ್ಟ್ ಕಮೀಟಿಯ ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಡಾ||ಗೋವಿಂದ ಗು. ಮಣ್ಣೂರ, ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ, ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸದರ ಕಾರ್ಯಕ್ರಮದ ಪ್ರಯೋಜನವನ್ನು ಕರ್ನಾಟಕ, ಮಹಾರಾಷ್ಟ, ಗೋವಾ ಹಾಗೂ ಇನ್ನೂ ಅನೇಕ ಊರುಗಳಿಂದ ಬಂದ ಸಾವಿರಾರು ಜನ ಭಕ್ತ ಸಮೂಹ ಪಡೆದುಕೊಂಡರು

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 31.03.2025 ರಂದು ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆಯನ್ನು ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ ಇವರು ವಹಿಸಿಕೊಂಡು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚೇರ್‌ಮನ್ನರಾಗಿ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಆಯ್ಕೆಯಾದರು, ವೈಸ್ ಚೇರ್‌ಮನ್ನರಾಗಿ ಶ್ರೀ ವಿನಾಯಕ ಅ. ಘೋಡ್ಕೆ ಇವರು ಆಯ್ಕೆಯಾದರು, ಗೌರವ ಕಾರ್ಯದರ್ಶಿಗಳಾಗಿ ರಮೇಶ ಎಸ್. ಬೆಳಗಾವಿ ಇವರು ಆಯ್ಕೆಯಾದರು, ಇವರುಗಳನ್ನು ದಿನಾಂಕ:-31-03-2025 ರಿಂದ 01-04-2025 ರ ಅವಧಿಗಾಗಿ ಆಯ್ಕೆ ಮಾಡಲಾಯಿತು,




  VIEW ALL