ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಆದಾಯ ತೆರಿಗೆ ಆಯುಕ್ತರ ಬೆಟ್ಟಿ.
Date : 18-07-2025
ದಿನಾಂಕ:-18.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸನ್ಮಾನ್ಯ ಶ್ರೀ ಜಿತೇಂದ್ರಕುಮಾರ, ಆಯುಕ್ತರು, ಆದಾಯ ತೆರಿಗೆ ಇಲಾಖೆ, ಬೆಂಗಳೂರು, ಸನ್ಮಾನ್ಯ ಶ್ರೀ ರಾಜಾ ರೆಡ್ಡಿ, ಜಂಟಿ ಆಯುಕ್ತರು, ಹುಬ್ಬಳ್ಳಿ, ಸನ್ಮಾನ್ಯ ಶ್ರೀ ಲಕ್ಕಪ್ಪ ಹನಮನ್ನವರ, ಉಪ ಆಯುಕ್ತರು, ಬೆಂಗಳೂರು, ಸನ್ಮಾನ್ಯ ಶ್ರೀ ಶರಣಕುಮಾರ ಕೋಳೂರು, ಐ.ಟಿ.ಐ.ಹುಬ್ಬಳ್ಳಿ ಹಾಗೂ ಸನ್ಮಾನ್ಯ ಶ್ರೀ ಜೈಪ್ರಕಾಶ, ಐ.ಟಿ.ಐ. ಕಲಬುರ್ಗಿ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಕಲಬುರ್ಗಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಮಹೇಂದ್ರ ಎಚ್. ಸಿಂಘಿ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.