Shri Siddharoodha Swamiji Math Trust Committee

Hubballi

www.srisiddharoodhaswamiji.in

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ನೆರವೇರಿದ ವಿಶ್ವ ಯೋಗ ದಿನಾಚರಣೆ
Date : 21-06-2025
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ವಿಶ್ವ ಯೋಗದಿನಾಚರಣೆ ಸಮಾರಂಭವು ದಿನಾಂಕ: 21.06.2025 ರಂದು ಮುಂಜಾನೆ 06-30 ಗಂಟೆಗೆ ಶ್ರೀಮಠದ ಕೈಲಾಸ ಮಂಟಪದ ಮುಂದಿನ ಆವರಣದಲ್ಲಿ ನೆರವೇರಿತು. ಸದರ ಕಾರ್ಯಕ್ರಮದ ಸಾನಿಧ್ಯವನ್ನು ಪರಮ ಪೂಜ್ಯಶ್ರೀ ಬಸವಾನಂದ ಮಹಾಸ್ವಾಮಿಗಳು, ಶ್ರೀಗುರು ಬಸವಾ ಮಹಾಮನೆ ಮನಗುಂಡಿ ಇವರು ವಹಿಸಿ ಮಾತನಾಡುತ್ತಾ ಐದು ಶಕ್ತಿಗಳಿಂದ ಕೂಡಿದ್ದು ಯೋಗ, ದೈಹಿಕ ಶಕ್ತಿ, ಬುದ್ದಿ ಶಕ್ತಿ, ಪ್ರಾಣ ಶಕ್ತಿ, ಮಾನಸಿಕ ಶಕ್ತಿ, ಭಾವನಾ ಶಕ್ತಿಗಳಿಂದ ಹುಟ್ಟಿಕೊಂಡಿದ್ದು ಯೋಗ. ದೈಹಿಕ ಶಕ್ತಿಗೆ ಕರ್ಮಯೋಗ ಅಂತಾ ಭಗವದ್ಗೀತೆಯಲ್ಲಿ ಕರೆಯುತ್ತಾರೆ. ನಾವು ನಡೆಯಬೇಕಾದರೆ ಬಾಗಬೇಕಾದರೆ ಶರೀರದಲ್ಲಿ ಶಕ್ತಿ ಬೇಕು, ಪ್ರಾಣಶಕ್ತಿ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುವುದು ಹಟಯೋಗ, ಬುದ್ದಿ ಶಕ್ತಿ ಜ್ಞಾನಯೋಗ ಮನಸ್ಸಿನ ಶಕ್ತಿಯನ್ನು ಬಳಸುವುದು ಶ್ರೀ ಸಿದ್ಧಾರೂಢರು ಬುದ್ಧಿ ಶಕ್ತಿಯನ್ನು ಬಳಸುತ್ತಿದ್ದರು. ಬೇರೆ ಬೇರೆ ದೇಶಗಳು ಒಂದೊಂದು ವಿಷಯಕ್ಕೆ ಪ್ರಖ್ಯಾತಿಯನ್ನು ಪಡೆದಿರುತ್ತವೆ ಆದರೆ ಭಾರತ ದೇಶವು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ದೇಶವಾಗಿದೆ ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಅಂತಾ ನುಡಿದರು. ಉದ್ಘಾಟಣೆಯನ್ನು ಶ್ರೀ ಸಿಎ. ಚನ್ನವೀರ ಮುಂಗುರವಾಡಿ, ಚೇರ್‌ಮನ್ನರು, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ. ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಇವರುಗಳು ಉಪಸ್ಥಿತರಿದ್ದರು. ಡಾ|| ಪಂಚಲಿಂಗಪ್ಪ ಜಂಬಣ್ಣ ಕವಲೂರು, ಶ್ರೀ ಆರೂಢ ಯೋಗಕೇಂದ್ರ, ಹುಬ್ಬಳ್ಳಿ. ಇವರು ಯೋಗ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ನೆರವೇರಿಸಿದರು. ಭಕ್ತಾದಿಗಳು ಮತ್ತು ಸಾರ್ವಜನಿಕರು ಇದರಲ್ಲಿ ಹೆಚ್ಚಿನ ಸಂಖ್ಯೆೆಯಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.