Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಜಲರಥೋತ್ಸವ
Date:-10.08.2025 ಶ್ರೀ ಸಿದ್ಧಾರೂಢಸ್ವಾಮಿಗಳ ಪುಣ್ಯಾರಾಧನೆ, ಜಲರಥೋತ್ಸವ
ಸ್ವಾತಂತ್ರ್ಯ ದಿನಾಚರಣೆ
Date:-15.08.2025 ಸ್ವಾತಂತ್ರ್ಯ ದಿನಾಚರಣೆ
ಶ್ರಾವಣ ಮಾಸದ ಸಪ್ತಾಹ
Date:-04-08-2025 ಶ್ರೀ ಸಿದ್ಧಾರೂಢಸ್ವಾಮಿಗಳ ಶ್ರಾವಣ ಮಾಸದ ಸಪ್ತಾಹ ಆರಂಭ

Daily News
2025 ನೇ ಸಾಲಿನ ಜಲರಥೋತ್ಸವ (ತೆಪ್ಪದ ತೇರು) ಕಾರ್ಯಕ್ರಮ.

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮಿಗಳ 96ನೇ ಪುಣ್ಯಸ್ಥರಣೆ ಅಂಗವಾಗಿ ಸಿದ್ದಾರೂಢ 'ಮಠದಲ್ಲಿ ರವಿವಾರ ಅದ್ಧೂರಿ ತಪ್ಪೋತ್ಸವ ನಡೆಯಿತು. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಶಿವನಾಮ ಸಪ್ತಾಹ, ಆರೂಢ ಮಹಿಮೆ ಪ್ರವಚನ ಮಂಗಲಗೊಂಡಿತು. ಶ್ರೀ ಸಿದ್ದಾರೂಢ ಟ್ರಸ್ಟ್ ಕಮಿಟಿಯಿಂದ ನಡೆದ ತಪ್ಪೋತ್ಸವ ಕಣ್ಣುಂಬಿಕೊಳ್ಳಲು ಭಕ್ತರು ಪಾಲ್ಗೊಂಡಿದ್ದರು. ಶ್ರಾವಣ ಮಾಸದ ನೂಲು ಹುಣ್ಣಿಮೆ ಮರುದಿನ ನಡೆವ ತೆಪ್ಪೋತ್ಸವದಲ್ಲಿ ರಾಜ್ಯ ಸೇರಿದಂತೆ ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸಿದ್ದರು. 'ಓಂ ನಮಃ ಶಿವಾಯ', 'ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ', 'ಹರ ಹರ ಮಹಾದೇವ', 'ಸಿದ್ದಾರೂಢರ ಜೋಳಿಗೆ ನಾಡಿಗೆಲ್ಲ ಹೋಳಿಗೆ' ಎಂಬ ಘೋಷಗಳು ಮು • ಮುಗಿಲು ಮುಟ್ಟಿದ್ದವು. ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಖರ್ಜೂರ ಹಾಗೂ ಹೂವು ಹಾರಿಸಿ ಭಕ್ತಿ ಸಲ್ಲಿಸಿದರು. ವಿವಿಧೆಡೆ ಪಲ್ಲಕ್ಕಿ ಮೆರವಣಿಗೆ: ಸಿದ್ದಾರೂಢ ಮಠದ ಆವರಣದಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಆರತಿ ಬೆಳಗಿ ಪಲ್ಲಕ್ಕಿಯನ್ನು ಬೀಳ್ಕೊಡಲಾಯಿತು. ವಿವಿಧ ಹೂವಿನ ಮಾಲೆಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಶ್ರೀ ಸಿದ್ದಾರೂಢರ ಮತ್ತು ಶ್ರೀ ಗುರುನಾಥಾರೂಢರ ಮೂರ್ತಿಗಳನ್ನು ಕೂರಿಸಲಾಗಿತ್ತು. ಟ್ರ್ಯಾಕ್ಟರ್ ಮೇಲೆ ಪಲ್ಲಕ್ಷ್ಮಿಯನ್ನು ಇರಿಸಿದ ಬಳಿಕ ಹಳೇ ಹುಬ್ಬಳ್ಳಿಯ ಗಣೇಶ ಪೇಟ, ಚನ್ನಪೇಟೆ ಹೀಗೆ ಸಿದ್ದಾರೂಢರು ಓಡಾಡಿದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 5 ಗಂಟೆ ವೇಳೆಗೆ ಮಠಕ್ಕೆ ವಾಪಸಾಯಿತು. ಮಠದ ಟ್ರಸ್ಟ್ ಕಮಿಟಿ ಚೇರನ್ ಚನ್ನವೀರ ಮುಂಗರವಾಡಿ, ಭಕ್ತರ ಸಭಾದ ಅಧ್ಯಕ್ಷ ಡಿ.ಆರ್. ಪಾಟೀಲ ಮಂಗಳಾರತಿ ನೆರವೇರಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಿದರು. ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವಿ.ವಿ.ಮಲ್ಲಾಪುರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀಮತಿ ಗೀತಾ ಟಿ. ಕಲಬುರಗಿ, ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ವಿ.ಡಿ.ಕಾಮರಡ್ಡಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ ಮತ್ತು ಶ್ರೀಮಠದ ಮ್ಯಾನೇಜರ್‌ರಾದ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಎ.ಕೆ.ಸಿಂಗ್ ಇವರ ಬೇಟಿ.

ದಿನಾಂಕ:-08.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಮಾಜಿ ರೈಲ್ವೇ ಜನರಲ್ ಮ್ಯಾನೇಜರರಾದ ಸನ್ಮಾನ್ಯ ಶ್ರೀ ಎ.ಕೆ.ಸಿಂಗ್ ಇವರು ದಂಪತಿ ಸಮೇತರಾಗಿ ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಶ್ರೀ ಎ.ಕೆ.ಸಿಂಗ್ ಇವರ ಅವಧಿಯಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲ್ವೇ ನಿಲ್ದಾಣದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾರಣೀಭೂತರಾಗಿರುತ್ತಾರೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ಧರ್ಮದರ್ಶಿಗಳಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಮಹೇಂದ್ರ ಎಚ್. ಸಿಂಘಿ, ರೈಲ್ವೇ ಅಧಿಕಾರಿಯಾದ ಶ್ರೀಮತಿ ಅರ್ಚನಾ ತಿವಾರಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಕೆರೆಗೆ ಬಾಗಿನ ಅರ್ಪಣೆ.

ದಿನಾಂಕ:-07.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಕೆರೆಯು ತುಂಬಿದ್ದು ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರ.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಚಲನ ಚಿತ್ರ ನಟರಾದ ಸಿಹಿಕಹಿ ಚಂದ್ರು ಬೆಟ್ಟಿ

ದಿನಾಂಕ:-06.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸ್ಟಾರ್ ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ ಬೋಜನ ಕಾರ್ಯಕ್ರಮವನ್ನು ನಡೆಸಿಕೊಡುವ ಹಾಗೂ ಕನ್ನಡ ಚಲನ ಚಿತ್ರ ನಟರಾದ ಶ್ರೀ ಸಿಹಿಕಹಿ ಚಂದ್ರು ಇವರು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ದಿನಾಂಕ: 06.08.2025 ಬುಧವಾರ ಪೂಜ್ಯ ಮಹಾತ್ಮರಿಂದ ಪ್ರವಚನ

ದಿನಾಂಕ: 06.08.2025 ಬುಧವಾರ ವಿಷಯ : “ದೊರಕಲೇನದರೊಳು ಪರಿಣತೆದಳೆವುದೆ ಚಂದ” ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ಸುಬ್ರಮಣ್ಯ ಮಹಾಸ್ವಾಮಿಗಳು, ನಿತ್ಯಾನಂದ ಆಶ್ರಮ, ಖುರ್ದಕಂಚನಹಳ್ಳಿ. ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಸಿದ್ದಸುಕ್ಷೇತ್ರ, ನಯಾನಗರ. ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ತೊಂಡಿಕಟ್ಟಿ. ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ನಾಗಲಿಂಗಸ್ವಾಮಿಗಳು, ನಾಗಲಿಂಗೇಶ್ವರ ಮಠ, ಚಿಕ್ಕುಂಬಿ ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ

ದಿನಾಂಕ: 05.08.2025 ಮಂಗಳವಾರ ಪೂಜ್ಯ ಮಹಾತ್ಮರಿಂದ ಪ್ರವಚನ

ದಿನಾಂಕ: 05.08.2025 ಮಂಗಳವಾರ ವಿಷಯ : “ಬೇಡ ಬೇಡ ಭೋಗದೊಡನಾಟ” ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ನಿಜಗುಣಮಹಾಸ್ವಾಮಿಗಳು, ಬ್ರಹ್ಮವಿದ್ಯಾಶ್ರಮ, ಹಳಕಟ್ಟಿ. ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ರಾಮಾನಂದ ಮಹಾಸ್ವಾಮಿಗಳು, ಸಿದ್ಧಾಶ್ರಮ, ಬಿಷ್ಟಮ್ಮನ ಕಕ್ಕೇರಿ. ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ, ತಿಮ್ಮಾಪೂರ ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಶಿವಬಸವ ಮಹಾಸ್ವಾಮಿಗಳು, ಮತ್ತಿಕಟ್ಟಿ. ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ

ದಿನಾಂಕ: -04.08.2025 ಸೋಮವಾರ ಪೂಜ್ಯ ಮಹಾತ್ಮರಿಂದ ಪ್ರವಚನ

ದಿನಾಂಕ: -04.08.2025 ಸೋಮವಾರ ವಿಷಯ : “ಪರತರ ಮುಕ್ತಿಗುಪಾಯವಿದು ನಿಜಶಿವಮಂತ್ರವಣ್ಣ” ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ರಾಣಿಬೆನ್ನೂರ. ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು, ದಾವಣಗೆರೆ. ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಹುಬ್ಬಳ್ಳಿ. ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಆರೂಢಭಾರತಿ ವiಹಾಸ್ವಾಮಿಗಳು, ಸಿದ್ಧಾರೂಢ ಮಿಷನ್, ಬೆಂಗಳೂರು. ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರ ಬೆಟ್ಟಿ.

ದಿನಾಂಕ:-04.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ನಿಂಗಣ್ಣ ಎಸ್. ಬಿರಾದಾರ ಇವರು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.




  VIEW ALL